ಮೋಹಕ ತಾರೆ ನಟಿ ರಮ್ಯಾ ಅವರು ನಮ್ಮ ಕನ್ನಡದಲ್ಲಿ 40 ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಕೇವಲ ಕನ್ನಡ ಮಾತ್ರ ಅಲ್ಲದೇ ತಮಿಳು, ತೆಲುಗು ಸಿನಿಮಾದಲ್ಲಿ ಸಹ ನಟನೆ ಮಾಡುತ್ತಾ ಕೋಟಿ ಕೋಟಿ ಅಭಿಮಾನಿಗಳ ಸಂಪಾದನೆ ಮಾಡಿದವರು ಮೋಹಕ ತಾರೆ ನಟಿ ರಮ್ಯಾ ಅವರು ಆದರೆ ನಂತರದ ದಿನಗಳಲ್ಲಿ ರಮ್ಯಾ ಅವರು ರಾಜಕೀಯಕ್ಕೆ ಕಾಲಿಟ್ಟ ಬಳಿಕ ಕೆಲವು ಗೆಲುವು ಸೋಲು ನೋಡಿ ಅಲ್ಲಿ ಕೂಡ ಹೆಚ್ಚು ಯಶಸ್ಸು ಕಾಣದೆ ಮತ್ತೆ ಈಗ ತಮ್ಮ ಅಧಿಕೃತ ಖಾತೆಗಳಾದ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಖಾತೆಗಳನ್ನು ಡಿಲೀಟ್ ಮಾಡಿಕೊಂಡಿದ್ದರು ಮತ್ತೆ ಈಗ ಅದೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಇತ್ತೀಚಿಗೆ ಮೋಹಕತಾರೆ ರಮ್ಯಾ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಕೆಲವರು ರಮ್ಯಾ ಯಾಕೆ ಈ ರೀತಿ ಹೇಳಿದರು ಎಂದು ಕಾಯುತ್ತ ಇದ್ದಾರೆ ಮತ್ತು ಇನ್ನೂ ಕೆಲವರು ಏನು ಹೇಳಿದರು ರಮ್ಯ ಅವರು ಎಂದು ಕೇಳುತ್ತಿದ್ದಾರೆ ಹೌದು ನಟಿ ರಮ್ಯ ಇತ್ತೀಚಿಗೆ ಮಾಧ್ಯಮ ಸಂದರ್ಶನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.
ಹೌದು ರಮ್ಯಾ ಅವರು ಈ ರೀತಿಯಾಗಿ ಹೇಳಿದ್ದಾರೆ ನಾವೆಲ್ಲರೂ ಭಾವೋದ್ರಿಕ್ತ ವ್ಯಕ್ತಿತ್ವವುಳ್ಳವರು ಹೀಗಾಗಿಯೇ ಪ್ರಪಂಚದಲ್ಲಿ ಏನೇ ನಡೆದರೂ ಬೇಸರ ಮಾಡಿಕೊಳ್ಳುತ್ತೇವೆ ಇಂತಹ ಪರಿಸ್ಥಿತಿಯಲ್ಲಿ ನಾವು ಸಿಕ್ಕಿಹಾಕಿಕೊಂಡರೆ ನಮ್ಮಲ್ಲಿನ ಜೀವನ ಉತ್ಸಾಹವೇ ಸಂಪೂರ್ಣವಾಗಿ ಕುಗ್ಗಿ ಹೋಗುತ್ತದೆ ಹೀಗಾದಾಗ ನಾವು ಹಿಂದೆ ಹೆಜ್ಜೆಯಿಡಲು ಮುಂದಾಗುತ್ತೇವೆ ಎಲ್ಲರಿಂದ ಪತ್ಯೇಕವಾಗಿರಲು ಬಯಸುತ್ತೇವೆ ನಮ್ಮ ನಮ್ಮಲ್ಲೇ ಬೇಸರ ಮಾಡಿಕೊಳ್ಳುತ್ತೇವೆ ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲೇ ಅನೇಕ ಪ್ರಶ್ನೆಗಳು ಮೂಡುತ್ತವೆ ಎಂದು ಮಾರ್ಮಿಕವಾಗಿ ಮಾಧ್ಯಮದಲ್ಲಿ ಸಂದರ್ಶನ ನೀಡಿದ್ದಾರೆ.
ರಮ್ಯಾ ಅವರು ಹೇಳಿದ್ದು ಇಷ್ಟು ನಾನು ಯಾರು? ಯಾಕಾಗಿ ಇದ್ದೀನಿ? ಮುಂದೇನು ಮಾಡಬೇಕು? ನನ್ನ ಜೀವನದ ಅರ್ಥವೇನು? ಮತ್ತು ಈಗ ನಾವು ನಮ್ಮನ್ನು ನಾವೇ ಆತ್ಮವಲೋಕನ ಮಾಡಿಕೊಳ್ಳುತ್ತೇವೆ ನಾವು ದುಃಖ ಮತ್ತು ಸುಖವನ್ನು ಬ್ಯಾಲೆನ್ಸ್ ಮಾಡುವುದನ್ನು ಮೊದಲು ಕಲಿಯಬೇಕು ಕಷ್ಟದ ಸಮಯದೊಂದಿಗೆ ಜೀವನವನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಜೀವನವೇ ಒಂದು ನಿಜವಾದ ಹೋರಾಟ ಹೀಗಾಗಿ ನಮ್ಮನ್ನು ನಾವು ಮೊದಲು ತಿಳಿದುಕೊಳ್ಳುವ ಮೂಲಕ ಬದುಕಬೇಕು ಎಂದು ನಟಿ ರಮ್ಯ ಹೇಳಿದ್ದಾರೆ.ಏನೇ ಹೇಳಿ ಒಂದು ಕಾಲದಲ್ಲಿ ಚಿತ್ರ ರಸಿಕರ ಮನಸ್ಸನ್ನು ರಂಜಿಸಿದ ಮೋಹಕ ತಾರೆ ರಮ್ಯಾ ಅವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪಮಟ್ಟಿನ ಅಸಮಾಧಾನದಲ್ಲಿ ಇದ್ದಾರೆ ಎಂದು ಗೊತ್ತಾಗಿದೆ
No comments:
Post a Comment